Tuesday, April 22, 2008

ಬಲಿಪ ನಾರಾಯಣ ಭಾಗವತರಿಗೆ ಗುರುಪೂಜಾ ಪುರಸ್ಕಾರ


ಕೇರಳ ರಾಜ್ಯದ ಸಂಗೀತ ನಾಟಕ ಅಕಾಡೆಮಿಯ 2007ನೇ ಸಾಲಿನ ಗುರುಪೂಜಾ ಪುರಸ್ಕಾರಕ್ಕೆ ತೆಂಕುತಿಟ್ಟಿನ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರನ್ನು ಆಯ್ಕೆ ಮಾಡಲಾಗಿದೆ.
ಕನರ್ಾಟಕದ ವಿಶಿಷ್ಟ ಜಾನಪದ ಕಲೆಯಾಗಿರುವ ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಕನರ್ಾಟಕವನ್ನು ಹೊರತು ಪಡಿಸಿ ಹೊರರಾಜ್ಯದ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಥಮ ಭಾಗವತರೆಂಬುದು ಬಲಿಪರಿಗೆ ಸಲ್ಲುವ ಹಿರಿಮೆಯಾಗಿದೆ.
ಪ್ರಶಸ್ತಿ ವಿತರಣಾ ಸಮಾರಂಭವು ಮೇ 2ರಂದು ಸಂಜೆ 5.30ಕ್ಕೆ ಕೇರಳದ ತೃಶ್ಯೂರಿನ ಸಂಗೀತ ನಾಟಕ ಅಕಾಡೆಮಿಯ ಸಭಾ ಮಂದಿರದಲ್ಲಿ ಜರಗಲಿದೆ.

No comments: