Thursday, April 24, 2008

ಮಿಜಾರ್ ಅಣ್ಣಪ್ಪರಿಗೆ ಗ್ರಾಮೋತ್ಸವ ಪ್ರಶಸ್ತಿ


ಅಜೆಕಾರಿನ ಕುಪರ್ಾಡಿ ಯುವ ವೃಂದದಿಂದ ನೀಡಲ್ಪಡುತ್ತಿರುವ ಗ್ರಾಮೋತ್ಸವ ಪ್ರಶಸ್ತಿಗೆ ಈ ಬಾರಿ ಯಕ್ಷಗಾನದ ಹಿರಿಯ ಕಲಾವಿದ ಮಿಜಾರು ಅಣ್ಣಪ್ಪರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೋತ್ಸವ ಯುವ ಗೌರವಕ್ಕೆ ರಾಷ್ಟ್ರೀಯ ಕ್ರೀಡಾ ಪಟು ನಯನ್ ಕುಮಾರ್ ಜೋಗಿ ಮುನಿಯಾಲು, ಉದ್ಯಮಿ ಸಂಘಟಕ ನಕುಲ್ದಾಸ್ ಪೈ, ಸುನೀಲ್ ಮೋಟಾರ್ಸ್ನ ಬಸ್ ನಿವರ್ಾಹಕ ಸುರೇಶ್, ದಸರಾ ಕ್ರೀಡಾಕೂಟದಲ್ಲಿ ವಿಭಾಗಮಟ್ಟದವರೆಗೆ ಸ್ಪಧರ್ಿಸಿದ ವಾಲಿಬಾಲ್ ಆಟಗಾತರ್ಿ ಅಪರ್ಿತಾ ಅಜೆಕಾರ್, ಅಕ್ಷತಾ ಹೆಮರ್ುಂಡೆ ಈ ಐವರು ಪಾತ್ರರಾಗಿದ್ದಾರೆ.
ಏ.26ರಂದು ಕುಪರ್ಾಡಿ ಬೊಬ್ಬರ್ಯ ಬಳಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅಜೆಕಾರಿನ ಕುಪರ್ಾಡಿ ಯುವ ವೃಂದದಿಂದ ನೀಡಲ್ಪಡುತ್ತಿರುವ ಗ್ರಾಮೋತ್ಸವ ಪ್ರಶಸ್ತಿಗೆ ಈ ಬಾರಿ ಯಕ್ಷಗಾನದ ಹಿರಿಯ ಕಲಾವಿದ ಮಿಜಾರು ಅಣ್ಣಪ್ಪರನ್ನು ಆಯ್ಕೆ ಮಾಡಲಾಗಿದೆ.
ಗ್ರಾಮೋತ್ಸವ ಯುವ ಗೌರವಕ್ಕೆ ರಾಷ್ಟ್ರೀಯ ಕ್ರೀಡಾ ಪಟು ನಯನ್ ಕುಮಾರ್ ಜೋಗಿ ಮುನಿಯಾಲು, ಉದ್ಯಮಿ ಸಂಘಟಕ ನಕುಲ್ದಾಸ್ ಪೈ, ಸುನೀಲ್ ಮೋಟಾರ್ಸ್ನ ಬಸ್ ನಿವರ್ಾಹಕ ಸುರೇಶ್, ದಸರಾ ಕ್ರೀಡಾಕೂಟದಲ್ಲಿ ವಿಭಾಗಮಟ್ಟದವರೆಗೆ ಸ್ಪಧರ್ಿಸಿದ ವಾಲಿಬಾಲ್ ಆಟಗಾತರ್ಿ ಅಪರ್ಿತಾ ಅಜೆಕಾರ್, ಅಕ್ಷತಾ ಹೆಮರ್ುಂಡೆ ಈ ಐವರು ಪಾತ್ರರಾಗಿದ್ದಾರೆ.
ಏ.26ರಂದು ಕುಪರ್ಾಡಿ ಬೊಬ್ಬರ್ಯ ಬಳಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Tuesday, April 22, 2008

ಬಲಿಪ ನಾರಾಯಣ ಭಾಗವತರಿಗೆ ಗುರುಪೂಜಾ ಪುರಸ್ಕಾರ


ಕೇರಳ ರಾಜ್ಯದ ಸಂಗೀತ ನಾಟಕ ಅಕಾಡೆಮಿಯ 2007ನೇ ಸಾಲಿನ ಗುರುಪೂಜಾ ಪುರಸ್ಕಾರಕ್ಕೆ ತೆಂಕುತಿಟ್ಟಿನ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರನ್ನು ಆಯ್ಕೆ ಮಾಡಲಾಗಿದೆ.
ಕನರ್ಾಟಕದ ವಿಶಿಷ್ಟ ಜಾನಪದ ಕಲೆಯಾಗಿರುವ ಯಕ್ಷಗಾನದ ತೆಂಕುತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಕನರ್ಾಟಕವನ್ನು ಹೊರತು ಪಡಿಸಿ ಹೊರರಾಜ್ಯದ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಥಮ ಭಾಗವತರೆಂಬುದು ಬಲಿಪರಿಗೆ ಸಲ್ಲುವ ಹಿರಿಮೆಯಾಗಿದೆ.
ಪ್ರಶಸ್ತಿ ವಿತರಣಾ ಸಮಾರಂಭವು ಮೇ 2ರಂದು ಸಂಜೆ 5.30ಕ್ಕೆ ಕೇರಳದ ತೃಶ್ಯೂರಿನ ಸಂಗೀತ ನಾಟಕ ಅಕಾಡೆಮಿಯ ಸಭಾ ಮಂದಿರದಲ್ಲಿ ಜರಗಲಿದೆ.

Wednesday, April 9, 2008

ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ಟರಿಗೆ ಪಾತಾಳ ಯಕ್ಷಕಲಾ ಪ್ರತಿಷ್ಠಾನದ ಪ್ರಶಸ್ತಿ


ಯಕ್ಷಗಾನದ ಹಿರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ ಹೆಸರಿನಲ್ಲಿ ಕೊಡಮಾಡಲಾಗುತ್ತಿರುವ ಪಾತಾಳ ಯಕ್ಷಕಲಾ ಪ್ರತಿಷ್ಠಾನದ ಪ್ರಶಸ್ತಿಗೆ ಈ ಬಾರಿ ಹಾಸ್ಯಗಾರ ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರಕಟಿಸಿದ್ದಾರೆ.
ಏ.14ರಂದು ರಾತ್ರಿ 8.30ಕ್ಕೆ ಕಾಸರಗೋಡಿನ ಎಡನೀರು ಶ್ರೀ ಕೃಷ್ಣ ರಂಗಮಂಟಪದಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಡನೀರು ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದು, ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಕೆ.ಅನಂತಕೃಷ್ಣ ವಹಿಸುವರು. ಪ್ರಧಾನ ಅಭ್ಯಾಗತರಾಗಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭಾಗವಹಿಸಲಿರುವರು ಎಂದವರು ತಿಳಿಸಿದ್ದಾರೆ.
ಪ್ರಶಸ್ತಿಯು 5 ಸಾವಿರ ನಗದು, ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ. ಕಳೆದೆರಡು ವರ್ಷಗಳಲ್ಲಿ ಕಟೀಲು ಪುರುಷೋತ್ತಮ ಭಟ್ಟ, ಕಡಬ ಸಾಂತಪ್ಪ, ಪೆರುವೊಡಿ ನಾರಾಯಣ ಭಟ್ರವರಿಗೆ ಪಾತಾಳ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Tuesday, April 1, 2008

ನಂದನೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಕಲಿಕಾ ಶಿಬಿರ

ಆಧುನಿಕ ಪಾಶ್ಚಾತ್ಯ ಸಂಸ್ಕೃತಿಯ ವೇಗಕ್ಕೆ ಯಕ್ಷಗಾನ ಅಳಿವಿನ ಅಂಚಿಗೆ ಸಾಗುವ ಭಯಉಂಟಾಗಿದೆ, ಆದರಿಂದ ಯಕ್ಷಗಾನದ ಉಳಿವಿಗೆ ಶ್ರಮಿಸಬೇಕು , ಕಲೆಯನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದು ಪದ್ಮಾನಾಭಯ್ಯ ಶ್ಯಾನುಭೋಗ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶಿವರಾಮ ಪಿ ಅಭಿಪ್ರಾಯಪಟ್ಟರು.
ಅವರು ಪಣಂಬೂರು ನಂದನೇಶ್ವರ ದೇವಸ್ಥಾನದಲ್ಲಿ ಪಣಂಬೂರು ಪದ್ಮನಾಭಯ್ಯ ಶ್ಯಾನುಭೋಗ್ ಶತಮಾನೋತ್ಸವ ಸಮಿತಿಯ ಸಹಾಭಾಗಿತ್ವದೊಂದಿಗೆ ಆರಂಭವಾದ ಯಕ್ಷಗಾನ ಕಲಿಕಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ದಿವಂಗತ ಪದ್ಮನಾಭಯ್ಯ ಶ್ಯಾನುಭೋಗ್ ನಂದನೇಶ್ವರ ದೇವಳದಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಲೆಯ ಬೀಜವನ್ನು ಬಿತ್ತಿದರು, ಅದು ಈಗ ಮರವಾಗಿ ವಿವಿಧ ಶಾಖೆಗಳಾಗಿ ಬೆಳೆದಿದೆ ಎಂದು ಅವರು ಹೇಳೀದರು.
ದೇವಳದ ಆಡಳಿತ ಮೊಕ್ತೇಸರ ಪಿ. ರತ್ನಾಕರ ರಾವ್ ಶಿಬಿರವನ್ನು ಉದ್ಘಾಟಿಸಿದರು. ನವಮಂಗಳೂರು ಯಕ್ಷಗಾನ ಮಂಡಳಿಯ ಅಧ್ಯಕ್ಷ ಸುಧಾಕರ ಕಾಮತ್, ಮೊಕ್ತೇಸರರಾದ ರಾಮಚಂದ್ರ ಹೆಬ್ಬಾರ್, ಸಾಧುಪೂಜಾರಿ, ಕಲಾವಿದ ಶ್ರೀಧರ ಐತಾಳ್, ಉದ್ಯಮಿ ಸತೀಶ್ ಬೈಕಂಪಾಡಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಎಂ ಶಂಕರನಾರಾಯಣ ಸ್ವಾಗತಿಸಿ ಮಧುಕರ ಭಾಗವತ್ ವಂದಿಸಿದರು.
ಸುಮಾರು 50 ರಿಂದ 60 ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು,