Monday, March 17, 2008

ಹಿಮ್ಮೇಳ ಕಲಾವಿದ ಕಡಬ ನಾರಾಯಣ ಆಚಾರ್ಯ ನಿಧನ

ಯಕ್ಷಗಾನದ ಪ್ರಸಿದ್ಧ ಚೆಂಡೆಮದ್ದಳೆಗಾರ ಕಡಬ ನಾರಾಯಣ ಆಚಾರ್ಯ(49) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.
ಸುರತ್ಕಲ್ ಮಹಾಮ್ಮಾಯಿ ಮೇಳದಲ್ಲಿ ಚೆಂಡೆಮದ್ದಳೆಗಾರರಾಗಿ 25 ವರ್ಷ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ 2 ವರ್ಷ ತರಬೇತಿ ನೀಡಿ ಅಪಾರ ಶಿಷ್ಯವರ್ಗ ದವರನ್ನು ತಯಾರಿಸಿದ್ದರು. ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಸಹಿತ ಹಲವಾರು ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದವು.
ತಾಯಿ, ಪತ್ನಿ, 5 ಗಂಡು, 1 ಹೆಣ್ಣು, ಇಬ್ಬರು ಸಹೋದರರು, ಓರ್ವ ತಂಗಿ ಸಹಿತ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಚೆಂಡೆ ಮದ್ದಳೆಯಲ್ಲಿ ಪ್ರಸಿದ್ಧರಾಗಿದ್ದ ಆಚಾರ್ಯರು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಪಾರ

No comments: