Monday, May 19, 2008

ದಿ.ಅಳಿಕೆ ರಾಮಯ್ಯ ರೈ ಸಂಸ್ಮರಣೆ


ಪುತ್ತೂರಿನ ಕರ್ನಾಟಕ ಯಕ್ಷಭಾರತಿ ಆರನೇ ಬಾರಿಗೆ ದೆಹಲಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಹೊಸದಿಲ್ಲಿಯ ತುಳುನಾಡು ಅಭಿವೃದ್ಧಿ ವೇದಿಕೆಯ ಬಂಟ್ಸ್ ಕಲ್ಚರಲ್ ಅಸೋಸಿಯೇಶನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗೋಕರ್ಣ ಮಂಡಲ, ದೆಹಲಿ ಕರ್ನಾಟಕ ಸಂಘ ಮತ್ತು ದೆಹಲಿ ಮಿತ್ರ ಇವುಗಳ ಸಹಯೋಗದೊಂದಿಗೆ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ `ದಿ.ಅಳಿಕೆ ರಾಮಯ್ಯ ರೈ ಸಂಸ್ಮರಣೆ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಕ್ಷಭಾರತಿ ಸಂಚಾಲಕ ಮತ್ತು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡಿ ಅಳಿಕೆಯವರನ್ನು ನೆನಪು ಮಾಡಿಕೊಂಡರು.
ರಾಮಯ್ಯ ರೈ ಯಕ್ಷಗಾನ ಸವ್ಯಸಾಚಿ. ಪಾರಂಪರಿಕ ಒಂದು ದೇಶೀ ಕಲೆಗೆ ತನ್ನ ವೈಯಕ್ತಿಕ ಛಾಪನ್ನು ಬೆರೆಸಿ ಸೃಜನಶೀಲ ಅಭಿವ್ಯಕ್ತಿ ನೀಡಿದ ಮೇರು ಕಲಾವಿದ ಎಂದವರು ಬಣ್ಣಿಸಿದರು.
ಅಳಿಕೆ ಸಂಸ್ಮರಣೆ ಬಳಿಕ ಕರ್ನಾಟಕ ಯಕ್ಷಭಾರತಿ, ಪುತ್ತೂರು ತಂಡವು ನಡೆಸಿಕೊಟ್ಟ ಕಾರ್ಯಕ್ರಮ `ಭೀಷ್ಮ ವಿಜಯ' ತಾಳಮದ್ದಳೆ'. ಸುಮಾರು ಎರಡೂವರೆ ತಾಸು ಜರಗಿತು. ಈ ಯಕ್ಷಗಾನ ಕೂಟ ಕಲಾವಿದರ ವಾದವೈಭವದೊಂದಿಗೆ ದೆಹಲಿ ಶೋತೃಗಳಲ್ಲಿ ಕೌತುಕ ಮೂಡಿಸಿತು. ಕುಕ್ಕುವಳ್ಳಿ, ಶ್ರೀಧರ ಡಿ.ಎಸ್, ಗಣರಾಜ ಕುಂಬಳೆ, ಡಾ.ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಆಶುಭಾಷಣದ ವಿಶಿಷ್ಠ ಮಾದರಿಗಳನ್ನು ತೆರೆದಿಟ್ಟರು.
ಎಂ.ಎಂ.ಸಿ ರೈ, ಡಾ.ಬಿ.ಬಿ. ಅಡ್ಕೋಳಿ, ರಾಧಾಭಟ್ ಪೂರಕ ಪಾತ್ರ ವಹಿಸಿದರು. ತೆಂಕು ಬಡಗುಗಳ ಪ್ರತಿಭಾನ್ವಿತ ಭಾಗವತ ನಾರಾಯಣ ಶಬರಾಯರ ಹಾಡುಗಾರಿಕೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

No comments: