ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಕೆ. ಮೋಹನ್ ನಿದರ್ೇಶನದ ಏಡ್ಸ್ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವಂತಹ ಯಕ್ಷಗಾನ ಪ್ರದರ್ಶನ ಅಭಿಯಾನವು ಫೆಬ್ರವರಿ 25 ರಂದು ಬೈಂದೂರು ಸಮೀಪದ ಶೀರೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಅನಂತರ ಮಾರ್ಚ್ 3 ರ ವರೆಗೆ ಕ್ರಮವಾಗಿ ಬೈಂದೂರು, ಕಿರಿಮಂಜೇಶ್ವರ, ಮರವಂತೆ, ಆಲೂರು, ನಾಡ, ಕಂಡ್ಲೂರು ಮತ್ತು ಶಂಕರನಾರಾಯಣದಲ್ಲಿ ಪ್ರದರ್ಶನಗಳು ನಡೆಯಲಿವೆ. ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು ಮತ್ತು ಕನರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿ, ಬೆಂಗಳೂರು ಮತ್ತು ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಸಂಯೋಜಿಸಲ್ಪಟ್ಟಿದೆ.
ಸುದರ್ಶನ ಉರಾಳ್, ನಾಗರಾಜ್, ಕಡ್ಲೆ ಗಣಪತಿ, ಲಂಬೋದರ ಹೆಗ್ಡೆ, ಮಾಧವ, ಭಾಸ್ಕರ, ವಿಶ್ವನಾಥ ಶೆಟ್ಟಿ, ಗಣೇಶ ಉಪ್ಪುಂದ, ತಮ್ಮಣ್ಣ ಗಾಂವ್ಕರ್, ಉದಯ, ನರಸಿಂಹ ತುಂಗ, ಇವರು ಕಲಾವಿದರಾಗಿ ಅಭಿನಯಿಸಿ ಜನಸಾಮಾನ್ಯರಿಗೆ ಏಡ್ಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಆರೋಗ್ಯಾಧಿಕಾರಿಗಳಾದ ಡಾ. ಎಂ.ಆರ್. ನಾಯ್ಕ್, ಡಾ. ರಾಮರಾವ್, ಆರೋಗ್ಯ ಶಿಕ್ಷಣಾಧಿಕಾರಿ ಅಪ್ಪುಸ್ವಾಮಿ ಮತ್ತು ಪ್ರದರ್ಶನ ನೀಡುವ ಯಕ್ಷದೇಗುಲ ತಂಡದ ಮುಖ್ಯಸ್ಥ ಸುದರ್ಶನ ಉರಾಳರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.
Monday, February 25, 2008
Subscribe to:
Post Comments (Atom)
No comments:
Post a Comment