
ವೇಷಧಾರಿಗಳಾದ ಧರ್ಣಪ್ಪ ಶೆಟ್ಟಿ ಪೂಂಜಾಲಕಟ್ಟೆ, ಲಕ್ಷ್ಮಣ ಶೆಟ್ಟಿ ಅಳಿಕೆ, ಅರುವ ಕೊರಗಪ್ಪ ಶೆಟ್ಟಿ ಮತ್ತು ಮೇಳದ ಚೌಕಿ, ವಿದ್ಯುದ್ದೀಪಗಳ ಸುವ್ಯವಸ್ಥೆಗಳಿಗಾಗಿ ಗೋಪಾಲ ಪೂಜಾರಿ ಕುರಿಯಾಡಿ ಅವರಿಗೆ ಪ್ರತಿಷ್ಠಾನದ ವತಿಯಿಂದ ಶಾಲು, ಸ್ಮರಣಿಕೆ ಪ್ರಶಸ್ತಿ ಫಲಕ ಹಾಗೂ ತಲಾ 5000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೌಟ ಪ್ರತಿಷ್ಠಾನದ ಅಧ್ಯಕ್ಷ ಡಿ.ಕೆ. ಚೌಟ ವಹಿಸಿದ್ದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಶಸ್ತಿ ವಿಜೇತ ಹಿರಿಯ ಸ್ತ್ರೀ ವೇಷಧಾರಿ ಕೋಳ್ಯೂರು ರಾಮಚಂದ್ರ ರಾವ್ ಅಭಿನಂದನಾ ಭಾಷಣ ಮಾಡಿದರು. ಭಾಸ್ಕರ ರೈ ಕುಕ್ಕುವಳ್ಳಿ ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಠಲ ಶೆಟ್ಟರ ಸಂಸ್ಮರಣೆ ಮಾಡಿದರು
ಪ್ರತಿಷ್ಠಾನದ ಅಧ್ಯಕ್ಷ ಸುರತ್ಕಲ್ ಜಯರಾಮ ಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಬಿ, ವಿದ್ವಾನ್ ಕೃಷ್ಣ ಭಟ್, ಮಂಚಿ ದೂಮಣ್ಣ ರೈ ಮತ್ತು ಪುಷ್ಪರಾಜ ಕುಕ್ಕಾಜೆ ಸನ್ಮಾನ ಪತ್ರ ವಾಚಿಸಿದರು. ಡಾ.ಎನ್. ನಾರಾಯಣ ಶೆಟ್ಟಿ, ಕೆ. ಸಾಯಿನಾಥ ಪೂಂಜ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ರಾಘವ ಚೌಟ ವಂದಿಸಿದರು. ಆನಂತರ ಪ್ರಸೂದನ ಕಾಳಗ ಯಕ್ಷಗಾನ ಬಯಲಾಟ ನಡೆಯಿತು.